ಮಂಸೋರೆ ಅವರ 19.20.21 ಚಲನ ಚಿತ್ರ ಈಗ ಯುಕೆಯಲ್ಲಿ ಬಿಡುಗಡೆ

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರು ಈ ಹಿಂದೆ ‘ಹರಿವು’, ‘ನಾತಿಚರಾಮಿ’, ‘ಆಕ್ಟ್ 1978’ ಸಿನಿಮಾಗಳನ್ನು ಮಾಡಿ ಮೆಚ್ಚುಗೆ ಪಡೆದುಕೊಂಡಿದ್ದರು. ಈ ಬಾರಿ ‘19.20.21’ ಹೆಸರಿನ ಒಂದು ನೈಜ ಘಟನೆ ಆಧಾರಿತ ಸಿನಿಮಾ ಮಾಡಿದ್ದಾರೆ. ಕರ್ನಾಟಕದಲ್ಲಿ ಅತ್ಯುತ್ತಮ reviews ಪಡೆದು ಈಗ ಈ ಚಿತ್ರ ಯುನೈಟೆಡ್ ಕಿಂಗ್ಡಮ್ ನಲ್ಲಿ ತೆರೆ ಕಾಣಲಿದೆ. ಭಾನುವಾರ ಮಾರ್ಚ್ ೧೨ ರಂದು ಬ್ರಿಸ್ಟಲ್ ನಲ್ಲಿ ವಿಶೇಷ ಪ್ರದರ್ಶನಗೊಂಡು ಅಲ್ಲಿಯ ವೀಕ್ಷಕರಿಂದ ಮೆಚ್ಚುಗೆ ಪಡೆದಿದೆ. ೧೯.೨೦.೨೧ ಚಿತ್ರ ಸಿನೆವರ್ಲ್ಡ್ ನಾಲ್ಕು ಪ್ರದೇಶಗಳಲ್ಲಿ […]

Continue Reading

ಶಿವರಾತ್ರಿಯಂದು, ಯುನೈಟೆಡ್ ಕಿಂಗ್ಡಮ್ ನ ‘ಲೇವಿಶಾಮ್’ನಲ್ಲಿ ಶಿವ ದರ್ಶನ

೨೧ನೇಯ ಶತಮಾನ ಸಾಕಷ್ಟು ಕಾರಣಗಳಿಗೆ ಖ್ಯಾತಿಯನ್ನು ಪಡೆಯುತ್ತಿದೆ. ಅದರಲ್ಲೂ ವಿಶೇಷವಾಗಿ ಭಾರತದಲ್ಲಂತೂ ರಾಜಕೀಯ ಮತ್ತು ಸಾಂಸ್ಕೃತಿಕ ವಿಚಾರವಾಗಿ ತೀವ್ರವಾಗಿ ಗಮನ ಸೇಳೆಯುತ್ತಿದೆ.ಯುವ ಮನಸ್ಸುಗಳು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ವಿಧ್ಯಾಮಾನಗಳು, ಅಲ್ಲಿನ ಜೀವನ ಶೈಲಿ ಮತ್ತು ಅವರ ಅನುಕರಣಯಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ ಎಂದೆನಿಸುತ್ತದೆ. ಆದರೆ ಇಲ್ಲಿ ಬಂದು ನೆಲೆಸಿರುವ ಅನಿವಾಸಿ ಭಾರತೀಯರು ತಮ್ಮ ಮುಂದಿನ ತಲೆಮಾರಿಗೆ ತಮ್ಮ ಭಾಷೆ,‌‌‌‌‌‌‌‌‌‌‌‌‌‌‌‌‌‌ಸಂ‍ಸ್ಕೃತಿ, ಸಂಸ್ಕಾರವನ್ನು ಹೇಗೆ ಸಾಗಿಸುವುದು ಎನ್ನುವ ನಿಟ್ಟಿನಲ್ಲಿ ತಲೆಯನ್ನು ಹಾಳು ಮಾಡಿಕೊಂಡು ಅವಿರತವಾಗಿ ಶ್ರಮಪಡುತ್ತಿರುವುದು ಎದ್ದು ಕಾಣುತ್ತಿದೆ. ಆ […]

Continue Reading

ಸುದ್ದಿ

ಎಲ್ಲರೂ ಸುದ್ದಿಗಾಗಿಕಾಯುವುದೆ ಹೆಚ್ಚು…ಹಲವರಿಗೆ ಇಲ್ಲ ಸಲ್ಲದ್ದನ್ನುಸುದ್ದಿಯನ್ನಾಗಿ ಮಾಡುವ ಹುಚ್ಚು… ಕೆಲವರಿಗೆ ಅವರ ಕೆಲಸದಿಂದಸುದ್ದಿ ಮಾಡುವ ಕಿಚ್ಚು…ಇನ್ನೂ ಕೆಲವರಿಗೆ ಅವರು ಮಾಡಿದಕೆಲಸವನ್ನು ಆಡಿಕೊಂಡುಸುದ್ದಿಯಾಗುವ ಹುಚ್ಚು… ಕೆಲವರಿಗೆ ತಮ್ಮ ಸಾಧನೆಯಿಂದಲೆಸುದ್ದಿಯಾಗಬೇಕೆಂಬ ಕಿಚ್ಚು…ಇನ್ನೂ ಕೆಲವರಿಗೆ ಸುದ್ದಿಯಾದವರಸಾಧನೆಯಲ್ಲಿ ಕಡ್ಡಿಯಾಡಿಸುತ್ತಬೆಚ್ಚಗಾಗಿರಬಹುದು ಎಂಬ ಹುಚ್ಚು… ಒಟ್ಟಿನಲ್ಲಿ ಸುದ್ದಿಯಾಗುವುದುಇಲ್ಲಾ ಸುದ್ದಿಯನ್ನು ಸದ್ದು-ಗದ್ದಲವನ್ನಾಗಿ ಮಾಡುವುದಜನಗಳಲ್ಲಿ ಹಚ್ಚುವುದು ಕಿಚ್ಚು, ಬಿಟ್ಟರೆಹಿಡಿಸುವುದು ಹುಚ್ಚು… ಗೋವರ್ಧನ ಗಿರಿ ಜೋಷಿಲಂಡನ್ ಯುನೈಟೆಡ್೦೨-ಫೆಬ್ರವರಿ-೨೦೨೩

Continue Reading

ಕನ್ನಡದ ಹಬ್ಬ…!!

ವಿಶ್ವಕ್ಕೆ ಈ ಸಂಗತಿ ಎಷ್ಟರ ಮಟ್ಟಿಗೆ
ಮುಟ್ಟಿತೋ ಇಲ್ಲಾ ಬಿಟ್ಟೀತೋ ?
ವಿಶ್ವ (ಭಟ್‌ ಸರ್) ದರ್ಶನದ ಕನಸು
ನನಸಾಯ್ತು, ವಿಶ್ವ (ಭಟ್ ಸರ್ ಅವರ)
ವಾಣಿಯನ್ನೂ ಕೇಳುವಂತಾಯಿತು…

Continue Reading

ಕನ್ನಡ…!!

ಉದಯಿಸುವ ರವಿಯಂತೆನಮ್ಮಯ ಈ ನುಡಿ ಕನ್ನಡ…ತಂಪೆರೆದು ಬೆಳದಿಂಗಳ ಚಲ್ಲುವಚಂದಿರನಂತೆ ಈ ಸವಿಗನ್ನಡ… ಸುರಿಯುವ ಮಳೆಯಂತೆಈ ಸಿರಿಗನ್ನಡ…ಹರಿಯುವ ಹೊಳೆಯಂತೆನಮ್ಮಯ ಈ ನುಡಿ ಕನ್ನಡ… ಆಗಸದ ವಿಶಾಲತೆಯಂತೆನಮ್ಮಯ ಈ ಸಿರಿಗನ್ನಡ…ಬೊರ್ಗೆರೆಯುವ ಕಡಲಿನಮೊರೆತಕ ಸಮವಿದು ಸವಿಗನ್ನಡ… ಹೆಳುತ್ತಿದ್ದಾರೆ ಕನ್ನಡ ಕಳೆದುಹೋಗುವುದಂತೆ,ಕೆಳಿದರೆ ಅನುಸುತ್ತದೆ ಅಲ್ಲಿನಡಿಯುತ್ತಿರಬಹುದೆ ಹುಚ್ಚರ ಸಂತೆ ನಾವು ಕನ್ನಡ ಉಳಿಸುವುದಂತೆಬೆಳಿಸುವುದಂತೆ, ಎಲ್ಲವೂಹಸಿ ಸುಳ್ಳಿನ ಕಂತೆ…ಕನ್ನಡವೋ ದಿನ ಬೆಳಗುವ ಆಸೂರ್ಯನಿದ್ದಂತೆ… -ಗೋವರ್ಧನ್ ಗಿರಿ ಜೋಷಿಲಂಡನ್, ಯುನೈಟೆಡ್ ಕಿಂಗ್ಡಮ್೦೫-ನವಂಬರ್-೨೦೨೨

Continue Reading

ಲಂಡನ್ನಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೧ನೇ ಆರಾಧನ ಮಹೋತ್ಸವವನ್ನು ವೈಭವದಿಂದ ಆಚರಿಸಲಾಯಿತು…!!

GBSRS BRUNDAVAN

Continue Reading

“ಕುಂದದೆ ವರಮಂತ್ರಾಲಯದಲ್ಲಿರುವಾ…ಕರೆದಲ್ಲಿಗೆ ಬರುವ…!!”

ಭಕ್ತರು ಜಗತ್ತಿನ ಯಾವುದೆ ಮೂಲೆಯಲ್ಲಿ ನಿಂತು ನೆನೆದರೂ ಅವರಿಗೆ ಅಷ್ಟೇ ಶೀಘ್ರದಲ್ಲಿಯೇ ಒಲಿದು ಅವರ ಬಯಕೆಗಳನ್ನು ಈಡೇರಿಸುವ ಮಹಾ ಮಹಿಮರೆಂದರೆ ಕೇವಲ ಒಬ್ಬರು ಅವರೆ ಗುರುಸಾರ್ವಭೌಮರು. ಅಂತಹುದರಲ್ಲಿ ಅವರು ೩೫೧ನೇ ವರ್ಷದ ಆರಾಧನ ಮಹೋತ್ಸವದ ಸುಸಂದರ್ಭ ಮತ್ತು ಸಂಭ್ರಮವೆಂದರೆ ? ವರ್ಣನಾತೀತ, ಅಕ್ಷರಗಳಲ್ಲಿ ಹಿಡಿದಿಡಲಸಾಧ್ಯ ಕೆವಲ ಅನುಭವಿಸಬೇಕಷ್ಟೆ.

Continue Reading

ಓ ನಲ್ಲೆ…!!

ಓ ನಲ್ಲೆ –ಸಮರಸದ ಜೀವನಕ್ಕೆಲ್ಲಿದೆ ಎಲ್ಲೆಭಾವೈಕ್ಯತೆಯಲ್ಲಿ ನಾವಿಬ್ಬರು ಒಂದಾದಮೇಲೆ…||ಪ|| ಸಂಸಾರವೆಂಬ ಸಂಗೀತದಲ್ಲೆಸೋಲು ಗೆಲವುಗಳೆಂಬುದು ಸ್ವರಗಳಲ್ಲೇ…ಸೋಲನ್ನು ಗೆಲುವಾಗಿಸಬಲ್ಲ ಸ್ವರ-ಸಂಯೋಜಕಿ ನೀನಾದ ಮೇಲೆ, ಪ್ರತಿ ದಿನವುಹೊಸದೊಂದು ಭಾವಗೀತೆಯಲ್ಲೇ…||೧|| ದೊಡ್ಡವರು ಭೋದನೆ ಚಿಕ್ಕವರ-ರೋಧನೆ ಮಧ್ಯ ಮಧ್ಯದಲ್ಲಿ ಬಂದುಹೋಗುವ ‘ಬಿ ಜಿ ಎಮ್’ ಗಳಲ್ಲವೆನೇ…?ಬಂಧು ಮಿತ್ರರ ಆಲಾಪ, ಅಕ್ಕಪಕ್ಕದವರಪ್ರಲಾಪ ಅವುಗಳಿಲ್ಲದೆ ‘ಸಂಸಾರ’ ಸಂಗೀತ-ವಾಗಬಲ್ಲದೆನೇ?…||೨|| ತಾಳ ತಂಬೂರಿ ನಾ ಒಪ್ಪಿ ಹಾಡಲುಕುಳಿತಿರುವೆನು ಹೇ ಮದನಾರಿ…ಜೀವನವೆಂಬ ಈ ಸಂಗೀತ ಕಛೇರಿಯಶಸ್ವಿಯಾಗಿಸಲು ಒಟ್ಟಾಗಿ ನುಡಿಸಿನಡಿಸುವುದೊಂದೆ ನಮಗಿರುವ ದಾರಿ…||೩|| -ಗೋವರ್ಧನ್ ಗಿರಿ ಜೋಷಿಲಂಡನ್, ಯುನೈಟೆಡ್ ಕಿಂಗ್ಡಮ್೨೬-ಜನೇವರಿ-೨೦೨೨

Continue Reading

ದೇವದುರ್ಗದಿಂದ ಲಂಡನ್‌ ವರೆಗೆ…!!

ಸಾಧನೆ ತಡವಾಗಬಹುದು; ಆದರೆ ತಡೆಯಲಾಗುವುದಿಲ್ಲಾ…!! ಇತ್ತೀಚಿಗೆ ಅದೇಕೊ ವಿಪರೀತ ಚಡಪಡಿಕೆ,ದುಗುಡು ಸದಾ ಅತೃಪ್ತಿ‌ಯ ನುಡಿಗಳು ಕೆಲವೊಮ್ಮೆ ಹತಾಶೆ. ಯೋಚಿಸುತ್ತಾ ಹೋದರೆ ಎರಡು‌ವರ್ಷಗಳಲ್ಲಿ ಅದೆಷ್ಟು ಬದಲಾವಣೆ. ಇದು ನಾನೆ ನಾ ಅನ್ನುವ ಅನುಮಾನ..? ಮಗ ಮಾತು ಕೇಳಿಸಿಕೊಳ್ಳತ್ತಿಲ್ಲ, ಮಗಳು ಅಳು ನಿಲ್ಲಿಸುತ್ತಿಲ್ಲ, ಇರುವ ಕೆಲಸವನ್ನು ಆಸ್ಥೆಯಿಂದ ಮಾಡಲಾಗುತ್ತಿಲ್ಲ ಅನ್ನುವ ಸಣ್ಣ ಸಣ್ಣ ವಿಷಯಕ್ಕೂ ಸರಾಗವಾಗಿ ಹರಿದು ಬರುತ್ತಿರುವ ಕೋಪ ಸಾಲದೆಂಬಂತೆ ಏಕಾಗ್ರತೆಯ ಕೊರತೆಯಿಂದ ಕೈಗೆತ್ತಿಕೊಂಡ ಕೆಲಸಗಳೆಲ್ಲವೂ ಅರ್ಧಂಬರ್ದ.ವಾಟ್ಸಪ್ ಫೆಸ್ಬುಕ್‌ನಲ್ಲಿಳಿದು ಕೆರೆಯುತ್ತ ಕೊರೆಯುತ್ತಾ ಸಮಯ ವ್ಯರ್ಥ ಮಾಡುತ್ತಾ ಆಲಸಿತನದ ಪರಮಾವಧಯನ್ನು […]

Continue Reading

ಕನ್ನಡ ಅಂದ್ರೆ ನಂಗೆ…

ಕಣ್ಣಲ್ಲಿ ಕಣ್ಣಿಟ್ಟು ಕಾಯೋ…ಕಣ್ಣ ಮುಚ್ಚಿದರೆ ಸಾಕು ಕನಸಲ್ಲಿ ಹಾಯೋ…ಕಣ್ತಪ್ಪಿ ಬೀಳಲು ಅಂದಳವಳು ಅಯ್ಯೊ…ಕೈ ಹಿಡಿದು ಎದ್ದೆಳಿಸಿದ ಭಾರತಾಂಬೆಯ-ಮಗಳು ಕಣಯ್ಯೋ… ಹಿಂದಿ ಉರ್ದು ತೆಲುಗು ಮರಾಠಿಕಲ್ಯಾಣ ಕರ್ನಾಟಕದ ಹೂದೋಟದಲ್ಲಿನನ್ನ ಅಕ್ಕ ಪಕ್ಕದ ಮನೆಯಂಗಳದಲ್ಲಿಒಂದಾಗಿ ಇಂದಿಗೂ ಅರಳುವ ಹೂವುಗಳು…ತುಳು ತಮಿಳು ಮಲಿಯಾಳಿ, ಜೊತೆಗೂಡಿ-ನಾ ಆಡಿ ಒಡನಾಡಿ ನಲಿದು ಒಲಿದ ಮನಂಗಳು… ಕನ್ನಡಿಗರೂ, ಕನ್ನಡ ನುಡಿ, ಅಂದ್ರೆನೆ ಹಂಗೆ…ಬೆಲ್ಲಕ್ಕೆ ಮುತ್ತಿಕ್ಕುವ ಇರುವೆಯ ಹಂಗೆಶಿಸ್ತಿನ ಸಿಪಾಯಿಗಳ ಸಾಲುಗಳು ಇದ್ದಂಗೆ…ಕಣ್ಣಿಗೆ ಬೀಳಲು ಮೂಗನೂ ಕರೆದುಮಾತಾಡುವ ಹಂಗೆ, ಕಿವಿಗೆ ಬೀಳಲೂ…ಕಾಲಿಲ್ಲದ ಕುಂಟ ನೂ ಎದ್ದು ಕುಣಿದುನಲಿದಾಡುವಂಗೆ… […]

Continue Reading